Monday | September 14, 2026 |

ಕೋವಿಡ್‌ ಪರಿಹಾರ ಲೆಕ್ಕಾಚಾರ; ಇಳಿಯದ ಸಣ್ಣ ಉದ್ಯಮಗಳ ಭಾರ

Support THE-FILE

spot_img

ಬೆಂಗಳೂರು; ಲಾಕ್‌ಡೌನ್‌ನಿಂದಾಗಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಣ್ಣ ಉದ್ಯಮಗಳಿಗೆ ಘೋಷಿಸಿರುವ ಖಾತರಿರಹಿತ ಸಾಲದ ಬಗ್ಗೆ ಹಲವು ವಿಶ್ಲೇಷಣೆಗಳು ಮುನ್ನೆಲೆಗೆ ಬಂದಿವೆ.

3 ಲಕ್ಷ ಕೋಟಿ ರು.ಮೊತ್ತದ ಖಾತರಿ ರಹಿತ ಸಾಲ ಘೋಷಿಸಿರುವ ಸರ್ಕಾರ, ಇದಕ್ಕೆ ಸಮಾನಾಂತರವಾಗಿ ಸಹಾಯಧನ ನೀಡದಿರುವುದಕ್ಕೆ ಸಣ್ಣ ಉದ್ಯಮಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸಣ್ಣ ಉದ್ಯಮಗಳು ತಳಮಟ್ಟದಲ್ಲಿರುವ ವಸ್ತು ಸ್ಥಿತಿಯನ್ನು ಗ್ರಹಿಸದಿರುವುದು ಮತ್ತು ಸಣ್ಣ ಉದ್ಯಮಗಳನ್ನು ವಲಯವಾರು ವರ್ಗೀಕರಿಸದೆಯೇ ಪರಿಹಾರ ಘೋಷಿಸಿದೆ ಎಂಬ ಅಭಿಪ್ರಾಯಗಳು ಸಣ್ಣ ಉದ್ಯಮಗಳ ವಲಯದಲ್ಲಿ ವ್ಯಕ್ತವಾಗಿವೆ.

ಸಹಾಯಧನ ವಿಚಾರವನ್ನೇ ಪ್ರಸ್ತಾಪ ಮಾಡದ ನಿರ್ಮಲಾ ಸೀತಾರಾಮನ್‌ ಅವರು ಕೇವಲ ಖಾತರಿರಹಿತ ಸಾಲಕ್ಕೆ ಹೆಚ್ಚಿನ ಒತ್ತು ನೀಡಿರುವುದು ಮುಂದಿನ 3 ತಿಂಗಳಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಶ್ರೇಣಿಯ ಉದ್ಯಮಗಳು ಮತ್ತೊಂದು ರೀತಿಯ ಆರ್ಥಿಕ ಬಿಕ್ಕಟ್ಟುಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ.

ಸರ್ಕಾರದ ಖಾತರಿ ಮೇರೆಗೆ ಸಾಲ ಪಡೆದುಕೊಳ್ಳುವ ಸಣ್ಣ ಉದ್ಯಮಗಳು ಪುನಃ ಸಾಲದ ಸುಳಿಯಲ್ಲಿ ಸಿಲುಕಲಿದೆಯೇ ಹೊರತು, ಈ ಬಿಕ್ಕಟ್ಟಿನಿಂದ ಹೊರಬರಲು ಹರಸಾಹಸ ಪಡಬೇಕಾದೀತು ಎಂದು ಸಣ್ಣ ಉದ್ಯಮಿಗಳು ವಿಶ್ಲೇಷಿಸಿದ್ದಾರೆ. ಹಾಗೆಯೆ ಈಗ ಘೋಷಿತವಾಗಿರುವ ಖಾತರಿರಹಿತ ಸಾಲ, ನೌಕರರಿಗೆ ಬಾಕಿ ಉಳಿಸಿಕೊಂಡಿರುವ ಸಣ್ಣ ಉದ್ಯಮಗಳ ವೇತನ ಭಾರವನ್ನು ಇಳಿಸುವುದಕ್ಕಷ್ಟೇ ಸೀಮಿತವಾಗಲಿದೆ. ಸಣ್ಣ ಉದ್ಯಮಗಳ ಮುಂದಿನ ಚಟುವಟಿಕೆಗಳನ್ನು ಎಂದಿನಂತೆ ಮುನ್ನಡೆಸಲಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಸಣ್ಣ ಉದ್ಯಮಗಳಿಗೆ ಈಗ ನೀಡಿರುವ ಪರಿಹಾರ ದೊಡ್ಡ ಮೊತ್ತದ್ದು ಎಂದು ಹೇಳಲಾಗುತ್ತಿದೆಯಾದರೂ ಅದು ಪೂರ್ಣ ಸತ್ಯವಲ್ಲ. ಘೋಷಿಸಿರುವ ಆರ್ಥಿಕ ನೆರವು ಉತ್ತಮ ಬೆಳವಣಿಗೆಯಾಗಿದೆಯಾದರೂ ಸಣ್ಣ ಉದ್ಯಮಗಳು ಇರಿಸಿದ್ದ ಬೇಡಿಕೆ ಬಗ್ಗೆ ತುಟಿಯೇ ಬಿಚ್ಚಿಲ್ಲ.

ಸಣ್ಣ ಉದ್ಯಮಗಳು ವಾರ್ಷಿಕ ಶೇ. 6 ರ ಬಡ್ಡಿ ದರದಲ್ಲಿ ಸಾಲಕ್ಕೆ ಬೇಡಿಕೆ ಇರಿಸಿದ್ದವು. ಈಗ ಘೋಷಿತವಾಗಿರುವ ಖಾತರಿ ರಹಿತ ಸಾಲಕ್ಕೆ ಬ್ಯಾಂಕ್‌ಗಳೇನಾದರೂ ಶೇ.12 ರಿಂದ 15 ರಷ್ಟು ಬಡ್ಡಿ ವಿಧಿಸಿದರೆ ಸಣ್ಣ ಉದ್ಯಮಗಳು ಪುನಃ ಸಾಲದ ಕೂಪಕ್ಕೆ ಸಿಲುಕಲಿದೆ. ಖಾತರಿ ರಹಿತ ನೀಡುವ ಸಾಲಕ್ಕೆ ಶೇಕಡವಾರು ಎಷ್ಟು ಪ್ರಮಾಣದಲ್ಲಿ ಬಡ್ಡಿ ವಿಧಿಸಬೇಕು ಎಂಬ ಬಗ್ಗೆ ಸರ್ಕಾರ ಸೊಲ್ಲೆತ್ತಿಲ್ಲ. ಒಂದು ವೇಳೆ ಬ್ಯಾಂಕ್‌ಗಳೇನಾದರೂ ಶೇ.12ರಿಂದ 15ರಷ್ಟು ಬಡ್ಡಿ ಕೇಳಿದರೆ ಸರ್ಕಾರದ ನಿಲುವೇನು?

ಬ್ಯಾಂಕ್‌ಗಳು ವಿಧಿಸುವ ಬಡ್ಡಿ ಹಣವನ್ನು ಸಣ್ಣ ಉದ್ಯಮಗಳು ಪಾವತಿಸಬಹುದು ಎಂದಿಟ್ಟುಕೊಂಡರೂ ಯಾವುದೇ ಸಹಾಯಧನ ಘೋಷಣೆ ಆಗದ ಕಾರಣ ಬ್ಯಾಂಕ್‌ಗಳಿಗೆ ಬಡ್ಡಿ ಪಾವತಿಸುವುದರಲ್ಲಿಯೇ ಸಣ್ಣ ಉದ್ಯಮಗಳು ಹೈರಾಣಾಗುತ್ತವೆ. ಇದು ನೇರವಾಗಿ ಸಣ್ಣ ಉದ್ಯಮಗಳಲ್ಲಿ ದುಡಿಯುತ್ತಿರುವ ನೌಕರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನಲಾಗಿದೆ.

‘ಲಾಕ್‌ಡೌನ್‌ ನಂತರ ಎಲ್ಲಾ ಬಗೆಯ ಮಾರುಕಟ್ಟೆಯೂ ಕುಸಿತಕ್ಕೆ ಒಳಗಾಗಿದೆ. ಲಾಕ್‌ಡೌನ್‌ ಆದ ನಂತರದ 2 ತಿಂಗಳವರೆಗೂ ಸಣ್ಣ ಉದ್ಯಮಗಳಲ್ಲಿ ದುಡಿಯುತ್ತಿರುವ ನೌಕರರಿಗೆ ವೇತನ ದೊರೆತಿಲ್ಲ. ಸರ್ಕಾರ ಘೋಷಿಸಿರುವ ಪ್ರಕಾರ ಖಾತರಿ ರಹಿತ ಸಾಲ ಪಡೆಯುವ ಸಣ್ಣ ಉದ್ಯಮ, ತನ್ನ ನೌಕರರಿಗೆ ಬಾಕಿ ಉಳಿಸಿಕೊಂಡಿರುವ 2 ತಿಂಗಳ ವೇತನ ನೀಡಲಷ್ಟೇ ಬಳಸಿಕೊಳ್ಳಲಿದೆ. ಬಾಕಿ ಉಳಿಸಿಕೊಂಡಿರುವ ವೇತನ ನೀಡಲಷ್ಟೇ ಖಾತರಿರಹಿತ ಸಾಲದ ಮೊತ್ತ ಬಳಕೆಯಾಗಿದ್ದೇ ನಿಜವಾದಲ್ಲಿ ಉದ್ಯಮದ ಮುಂದಿನ ಚಟುವಟಿಕೆ ಹೇಗೆ ನಡೆಯಲಿದೆ,’ ಎಂದು ಪ್ರಶ್ನಿಸುತ್ತಾರೆ ಆರ್ಥಿಕ ತಜ್ಞ ಕರಣ್‌ಕುಮಾರ್‌

ಒಂದು ವೇಳೆ ಸಣ್ಣ ಉದ್ಯಮಗಳು ಉತ್ಪನ್ನದಾಯಕ ಚಟುವಟಿಕೆಗಳನ್ನು ಪುನರಾರಂಭಿಸಿದರೂ ಉತ್ಪನ್ನವನ್ನು ಖರೀದಿಸುವ ಶಕ್ತಿ ಗ್ರಾಹಕನಿಗಿಲ್ಲದಿರುವಾಗ ಸಣ್ಣ ಉದ್ಯಮಗಳು ಆದಾಯವನ್ನು ಹೇಗೆ ತಾನೇ ಗಳಿಸಲಿವೆ? ‘ಎಂಎಸ್‌ಎಂಇ ವ್ಯಾಪ್ತಿಗೊಳಪಡುವ 13 ಕೋಟಿ ನೌಕರರ ಪೈಕಿ ಸುಮಾರು 8 ಕೋಟಿ ನೌಕರರಿಗೆ ಕಳೆದ 2 ತಿಂಗಳಲ್ಲಿ ಯಾವುದೇ ವೇತನ ದೊರೆತಿಲ್ಲ. ಹೀಗಾಗಿ ಉದ್ಯಮಗಳು ಬಾಕಿ ಉಳಿಸಿಕೊಂಡಿರುವ 2 ತಿಂಗಳ ವೇತನವನ್ನು ಸರ್ಕಾರವೇ ಭರಿಸಬೇಕು. ಇದಕ್ಕೆ ಅಂದಾಜು 3 ಲಕ್ಷ ಕೋಟಿ ರು.ಸಹಾಯಧನವನ್ನು ಆಯಾ ಉದ್ಯಮಗಳಿಗೆ ಬಿಡುಗಡೆ ಮಾಡಬೇಕು.’ ಎನ್ನುತ್ತಾರೆ ಆರ್ಥಿಕ ತಜ್ಞ ಕರಣ್‌ಕುಮಾರ್‌

ಚೀನಾ, ಜಪಾನ್‌, ಕೆನಡಾ, ಯೂರೋಪ್‌ ಮತ್ತು ಅಮೇರಿಕಾದಲ್ಲಿ ಖಾಸಗಿ ನೌಕರರಿಗೆ ಶೇ. 80ರಷ್ಟು ವೇತನವನ್ನು ಅಲ್ಲಿನ ಸರ್ಕಾರಗಳೇ ಭರಿಸಿವೆ. ಹೀಗಾಗಿ ಅಲ್ಲಿನ ಉದ್ಯಮಗಳು ಬಹುಬೇಗನೇ ಚೇತರಿಸಿಕೊಳ್ಳಲಿವೆ. ಉದ್ಯಮಗಳ ಮೇಲಿದ್ದ ಭಾರವನ್ನು ಅಲ್ಲಿನ ಸರ್ಕಾರಗಳು ಇಳಿಸಿವೆ. ಇದರಿಂದ ಮಾರುಕಟ್ಟೆಯಲ್ಲಿ ಗ್ರಾಹಕನಿಗೆ  ಉತ್ಪನ್ನ ಖರೀದಿಸುವ ಶಕ್ತಿ ನೀಡಿದೆ.

ಆದರಿಲ್ಲಿ ಕಂಪನಿಗಳಿಗೆ ಖಾತರಿರಹಿತ ಸಾಲವನ್ನು ನೀಡಿದೆಯೇ ಹೊರತು ಸಹಾಯಧನ ನೀಡಿಲ್ಲ. ಹೀಗಾಗಿ ಉದ್ಯಮಗಳು ಪುನಃ ಸಾಲದ ಸುಳಿಯಲ್ಲಿ ಸಿಲುಕಿ ಮತ್ತಷ್ಟು ತೊಂದರೆಗೊಳಗಾಗಲಿವೆ. ಇದು ವಿಪರೀತ ಮಟ್ಟಕ್ಕೆ ಹೋದಲ್ಲಿ ಶೇ.80ರಷ್ಟು ಎಂಎಸ್‌ಎಂಇ ಉದ್ಯಮಗಳು ಶಾಶ್ವತವಾಗಿ ಸ್ಥಗಿತಗೊಳ್ಳಲಿವೆ ಎಂದು ಹೇಳಲಾಗಿದೆ.

ಬಿಡಿ ಭಾಗಗಳ ಉಪಕರಣಗಳನ್ನು ಉತ್ಪಾದಿಸುವ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ದೊಡ್ಡ ಗಾತ್ರದ ಕಂಪನಿಗಳು ತಮ್ಮ ಬೇಡಿಕೆಯನ್ನು ನಿಲ್ಲಿಸಿವೆ. ಹೀಗಾಗಿ ಬಿಡಿಭಾಗಗಳ ಉಪಕರಣಗಳ ತಯಾರಿಕೆ ಚಟುವಟಿಕೆಗಳು ಪುನರಾರಂಭಗೊಳ್ಳುವ ಸೂಚನೆಗಳೂ ಇಲ್ಲ.ಹೀಗಾಗಿ ಖಾತರಿರಹಿತ ಸಾಲ ಪಡೆದುಕೊಂಡರೂ ದೊಡ್ಡ ಗಾತ್ರದ ಕಂಪನಿಗಳು ಬೇಡಿಕೆ ನಿಲ್ಲಿಸಿರುವ ಕಾರಣ, ಮುಂದಿನ ದಿನಗಳಲ್ಲಿ ಖಾತರಿರಹಿತ ಸಾಲವೂ ಕೂಡ ಎನ್‌ಪಿಎ ಆದರೆ ಅಚ್ಚರಿಯೇನಿಲ್ಲ.

Hot this week

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

Topics

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ...

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ...

ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ...

Related Articles

Popular Categories

spot_imgspot_img