Sunday | June 14, 2026 |

‘ದಿ ಫೈಲ್‌’ಗೆ ವರ್ಷದ ಸಂಭ್ರಮ; ನಿಜವಾಗಿಯೂ ಇದು ಸುಲಭದ ಕೆಲಸವಲ್ಲ

Support THE-FILE

spot_img

ದಿ ಫೈಲ್’ ಅಂತೊಂದು ತನಿಖಾ ವರದಿಗಳ ಅಂರ್ತಜಾಲ ಪತ್ರಿಕೆಯನ್ನವರು ಮಾಡಲು ಹೊರಟಾಗ ನನ್ನ ಪ್ರಕಾರ ಅವರ ಜೊತೆ ಇದ್ದಿದ್ದು ಅವರ ಧೈರ್ಯ ಮಾತ್ರ! ಧೈರ್ಯ, ತನಿಖೆ ಮಾಡುವ ಬಗೆಗಿನದಲ್ಲ; ಅದನ್ನವರು ಕಳೆದ ಹತ್ತು ವರ್ಷಗಳಿಂದಲೂ ನಿರಂತರವಾಗಿ ನಿಷ್ಠೂರವಾಗಿ ದಿಟ್ಟವಾಗಿ ಪ್ರಾಮಾಣಿಕವಾಗಿ ಮಾಡುತ್ತಲೇ ಬಂದಿದ್ದಾರೆ.

ಆದರೆ ಅಷ್ಟೂ ವರ್ಷದ ಅವರ ಪ್ರಯಾಣದಲ್ಲಿ ಅವರಿಗೆ ಒಂದಲ್ಲಾ ಒಂದು ಸುದ್ದಿಸಂಸ್ಥೆಯ ಆಸರೆಯಿತ್ತು, ತಿಂಗಳು ಮುಗಿದರೆ ಸಂಬಳ ಬರುವ ನೆಚ್ಚಿಕೆಯಿತ್ತು, ಯಾರಾದರೂ ಘಾತುಕರು ಬೆನ್ನುಬಿದ್ದರೆ ಕಾಯುವುದಕ್ಕೆ ಒಂದು ವ್ಯವಸ್ಥೆಯಿತ್ತು, ಕಾನೂನು ಹೋರಾಟದ ಅಗತ್ಯಬಿದ್ದರೆ ವಕಾಲತ್ತು ಹಾಕಲು ಆಯಾ ಕಂಪನಿಯ ಲೀಗಲ್ ಟೀಮುಗಳೇ ಇದ್ದವು, ವೃತ್ತಿಪರ ಹಾಗೂ ನೈತಿಕ ಬೆಂಬಲಕ್ಕೆ ಸಂಪಾದಕರುಗಳಿದ್ದರು; ಯಾವುದೇ ಅಡೆತಡೆ ಅಡ್ಡಿ ಆತಂಕಗಳಿಲ್ಲದೆ ಅವರ ತನಿಖಾ ಸರಣಿ ನಡೆದಿತ್ತು. ಎಂತೆಂಥಾ ಘಟಾನುಗಟಿಗಳನ್ನೆಲ್ಲಾ ಅವರು ಅಲ್ಲಾಡಿಸಿಬಿಟ್ಟಿದ್ದರು ಆಗ!

ಅಂಥದ್ದೊಂದು ವಲಯದಿಂದ ಹೊರಬಿದ್ದು ಸ್ವಂತವಾಗಿ ಡಿಜಿಟಲ್ ತನಿಖಾ ಪತ್ರಿಕೆ ಶುರುಮಾಡುವುದಿದೆಯಲ್ಲಾ, ಅದು ಹುಚ್ಚುತನದ ಇನ್ನೊಂದು ಮಜಲು; ಅದೂ ಕೈಯಲ್ಲಿ ಕನಿಷ್ಠ ಒಂದು ತಿಂಗಳ ದಿನಸಿಗಾಗುವಷ್ಟೂ ದುಡ್ಡಿಲ್ಲದಾಗ! ಆದರೆ ಮಹಾಂತೇಶ್ ಅವರಿಗೆ ತಮ್ಮ ಕೆಲಸದ ಮೇಲೆ ಪ್ರಾಮಾಣಿಕತೆಯ ಮೇಲೆ ನಂಬಿಕೆಯಿತ್ತು, ತಾವು ಈ ಹತ್ತು ವರ್ಷಗಳಲ್ಲಿ ತಮ್ಮ ನೇರವಂತಿಕೆ ಹಾಗೂ ವೃತ್ತಿಪರತೆಯ ಮೂಲಕವೇ ಗಳಿಸಿಕೊಂಡಿದ್ದ ತಮ್ಮ ಹಿತೈಷಿಗಳ ಬಳಗದ ಬೆಂಬಲದ ಬಗ್ಗೆ ಧೈರ್ಯವಿತ್ತು; ಮುನ್ನುಗ್ಗಿಯೇಬಿಟ್ಟರು.

ಈಗ ನೋಡಿದರೆ ಅವರ ಸಾಹಸಕ್ಕೆ ಆಗಲೇ ಒಂದು ವರ್ಷವಾಗಿದೆ! ಈ ಒಂದು ವರ್ಷದಲ್ಲಿ ಹಲವಾರು ಭ್ರಷ್ಟ ಅಧಿಕಾರಿಗಳನ್ನವರು ವಿಚಾರಣೆಯ ಒರೆಗಲ್ಲಿನ ಮೇಲೆ ನೂಕಿದ್ದಾರೆ, ಮಂತ್ರಿಯೊಬ್ಬರ ರಾಜೀನಾಮೆಗೆ ಕಾರಣರಾಗಿದ್ದಾರೆ, ಕೋವಿಡ್ ಹೆಸರಿನಲ್ಲಿ ನಡೆದ ಹಗಲು ಲೂಟಿಯ ಬಗ್ಗೆ ಸಾಲುಸಾಲು ವರದಿಗಳನ್ನು ಮಾಡಿ ಜಡ್ಡುಗಟ್ಟಿ ಕೂತಿದ್ದ ವಿರೋಧಪಕ್ಷದವರೂ ಮೈಕೊಡವಿಕೊಂಡೆದ್ದು ಬೀದಿ ಹೋರಾಟಕ್ಕೆ ಧುಮುಕುವ ಹಾಗೆ ಮಾಡಿದ್ದಾರೆ! ಕೊನೆಗೆ, ಇತ್ತೀಚೆಗೆ, ಮಠಾಧೀಶರೊಬ್ಬರ ಸಂಬಂಧಿಯ ಬಗ್ಗೆ ವಿಸ್ತೃತವಾದ ವರದಿಗಳನ್ನು ಪ್ರಕಟಿಸಿ ಮೈಮೇಲೆ ಪೊಲೀಸ್ ಕೇಸೆಳೆದುಕೊಂಡಿದ್ದಾರೆ — ಅದೂ, ಆತನ ಬಗ್ಗೆ ಮುಖ್ಯವಾಹಿನಿಯ ಪತ್ರಿಕೆಗಳು ನಾಕು ಸಾಲು ನೇರವಾದ ಸುದ್ದಿ ಹಾಕಲೂ ಹಿಂಜರಿಯುತ್ತಿರುವ ಈ ದಿನಗಳಲ್ಲಿ!

ಬಹುಶಃ ಚಿತ್ರದುರ್ಗದ ಪೊಲೀಸರು ಈ ಕೇಸು ಹಾಕಿದ ಸಂದರ್ಭದಲ್ಲೇ ಮಹಾಂತೇಶ್ ಅವರ ಸಾತ್ವಿಕ ಬಳಗದ ವಿಸ್ತಾರ ಮತ್ತು ಶಕ್ತಿ ಜಗತ್ತಿಗೆ ತಿಳಿದಿದ್ದು! ಆದರೆ ಅಂತರಂಗದಲ್ಲಿ ಅವರನ್ನು ಬಲ್ಲ ಪತ್ರಕರ್ತ ಮಿತ್ರರಿಗದು ಮುಂಚಿನಿಂದಲೇ ಗೊತ್ತಿದ್ದ ಸತ್ಯ. ಆ ಸತ್ಯ ಅವರನ್ನು ಗೆಲ್ಲಿಸಿದೆ.
ಒಂದು ವರ್ಷವೆನ್ನುವುದು, ಇಂಥದ್ದೊಂದು ವಿಶಿಷ್ಟ ಪತ್ರಿಕೋದ್ಯಮದಲ್ಲಿ ತುಂಬಾ ದೊಡ್ಡದು. ಇದು ಇನ್ನೂ ಬೆಳೆಯುವುದಕ್ಕೆ, ಜನಪರವಾದ ಒಂದು ಧ್ವನಿಯಾಗಿ ಇನ್ನಷ್ಟು ಗಟ್ಟಿಗೊಳ್ಳುವುದಕ್ಕೆ, ಖಂಡಿತವಾಗಿಯೂ ಮಹಾಂತೇಶ್ ಅವರ ಪ್ರಯತ್ನಕ್ಕೆ ಒಂದಿಷ್ಟು ನಿರಂತರ ಹರಿವಿನ ಆರ್ಥಿಕ ಬಲದ ಅಗತ್ಯವಿದೆ.

ಕೇವಲ ಇಚ್ಛಾಶಕ್ತಿಯಿಂದಲೇ ನಡೆಯುತ್ತಿರುವ ಅವರ ವಸ್ತುನಿಷ್ಠ ತನಿಖಾ ವರದಿಗಾರಿಕೆ ನಿರಂತರವಾಗಿ ನಡೆಯಬೇಕು, ಅವರಿಗೆ ಸಹೃದಯಿ ಹಾಗೂ ಸಮಾಜಮುಖಿ ಪೋಷಕರು ಜೊತೆಯಾಗಬೇಕು. ಒಳ್ಳೆಯ ಉದ್ದೇಶದ ಒಳ್ಳೆಯ ಕೆಲಸಕ್ಕೆ ಅಂಥ ಬೆಂಬಲ ಸಿಕ್ಕೇ ಸಿಗುತ್ತದೆ.

Hot this week

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

Topics

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ...

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ...

ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ...

Related Articles

Popular Categories

spot_imgspot_img