Sunday | June 14, 2026 |

ಟಾಟಾ ಐರನ್‌ ಸ್ಟೀಲ್‌ ಕಂಪನಿ ಸೇರಿ 15 ಕೈಗಾರಿಕೆಗಳಿಗೆ ಬೀಗ; 2,086 ಮಂದಿಗೆ ಉದ್ಯೋಗ ನಷ್ಟ

Support THE-FILE

spot_img

ಬೆಂಗಳೂರು; ಕಚ್ಚಾ ಮಾಲಿನ ಕೊರತೆ, ಹಣಕಾಸಿನ ತೊಂದರೆ, ಕಬ್ಬಿನ ಬಾಕಿ ಬಿಲ್‌ ಪಾವತಿ ಮಾಡದಿರುವುದು, ಯೋಗ್ಯ ದರದಲ್ಲಿ ಕಚ್ಚಾ ವಸ್ತು ದೊರೆಯದಿರುವುದು ಸೇರಿದಂತೆ ಇನ್ನಿತರೆ ಕಾರಣಗಳನ್ನು ಮುಂದಿರಿಸಿಕೊಂಡು ಟಾಟಾ ಐರನ್‌ ಸ್ಟೀಲ್‌ ಕಂಪನಿ ಸೇರಿದಂತೆ ಕಳೆದ 3 ವರ್ಷಗಳಲ್ಲಿ ಒಟ್ಟು 15 ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳು ರಾಜ್ಯದಲ್ಲಿ ಮುಚ್ಚಿ ಹೋಗಿವೆ. ಇದರಿಂದಾಗಿ ಒಟ್ಟು 2,086 ಮಂದಿ ಕೆಲಸ ಕಳೆದುಕೊಂಡಿದ್ದಾರೆ.

 

ವಿಧಾನಪರಿಷತ್‌ನ ಟಿ ಎ ಶರವಣ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆ (197)ಗೆ ಕೈಗಾರಿಕೆ ಸಚಿವ ಮುರುಗೇಶ್‌ ಆರ್‌ ನಿರಾಣಿ ಅವರು ಈ ಸಂಬಂಧ ಅಂಕಿ ಅಂಶಗಳನ್ನು ಒದಗಿಸಿದ್ದಾರೆ.

 

ಆಡಳಿತ ಮಂಡಳಿಯಲ್ಲಿ ಬದಲಾವಣೆ, ಘಟಕದ ವಿಸ್ತರಣೆ, ಹಾನಿ ಸಂಭವಿಸಿರುವುದು, ರೈತರ ಕಬ್ಬಿನ ಬಾಕಿ ಬಿಲ್‌ ಪಾವತಿ ಮಾಡದೇ ಇರುವುದು, ಹಣಕಾಸಿನ ತೊಂದರೆ, ಇತರೆ ತಾಂತ್ರಿಕ/ಹಣಕಾಸು, ಕಚ್ಛಾ ಮಾಲಿನ ಕೊರತೆ, ಹಣಕಾಸಿನ ಮುಗ್ಗಟ್ಟು, ಕಚ್ಚಾ ವಸ್ತು ಯೋಗ್ಯ ದರದಲ್ಲಿ ಮತ್ತು ಅವಶ್ಯಕ ಪ್ರಮಾಣದಲ್ಲಿ ದೊರೆಯದಿರುವುದು, ಎಕಾನಾಮಿಕ್‌ ವಯಬಲಿಟಿ ಇಲ್ಲದೇ ಕಾರ್ಮಿಕರಿಗೆ ಸಂಬಳ ಕೊಡದಲು ಸಾಧ್ಯವಾಗದೇ ಕಾರ್ಮಿಕರು ರಾಜೀನಾಮೆ ನೀಡಿರುವುದು, ಆರ್ಥಿಕನಷ್ಟ, ನಿರ್ವಹಣೆ ಮತ್ತು ಆಂತರಿಕ ಸಮಸ್ಯೆಗಳು ಕೈಗಾರಿಕೆಗಳು ಮುಚ್ಚಲು ಕಾರಣ ಎಂದು ವಿವರಣೆ ನೀಡಿದ್ದಾರೆ.

 

 

ಮುಚ್ಚಿ ಹೋಗಿರುವ ಕೈಗಾರಿಕೆಗಳ ಪಟ್ಟಿ

 

ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಜಾ ಸೀಮೆಂಟ್ಸ್‌ ಪ್ರೈ ಲಿ., ರೈತರ ಸಹಕಾರಿ ಸಕ್ಕರೆ ಕಾಖಾfನೆ, ಸಾವರಿನ್‌ ಇಂಡಸ್ಟ್ರೀಸ್‌ ಕಂಪನಿಯು ಆಡಳಿತ ಮಂಡಳಿಯಲ್ಲಿ ಬದಲಾವಣೆ ಮತ್ತು ಘಟಕದ ವಿಸ್ತರಣೆ ಕೈಗೊಂಡಿರುವುದರಿಂದ ಮುಚ್ಚಿ ಹೋಗಿವೆ.

 

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸ್ಯಾನ್‌ ಸಿಲ್ಕ್‌ ಲಿ, ಟಾಟಾ ಐರನ್‌ ಸ್ಟೀಲ್‌ ಕಂಪನಿ, ತೇಜಕಮಲ್‌ ಫಾರ್ಮಾಸ್ಯುಟಿಕಲ್ಸ್‌, ವೆಲ್‌ ಫ್ಯಾಬ್‌ ಟೆಕ್ನೋಲಜಿ ಪ್ರೈ ಲಿ., ಕ್ಯಾಡ್ಜೀಸ್‌ ಇಂಡಿಯಾ ಪ್ರೈ ಲಿ., ಹಣಕಾಸಿನ ತೊಂದರೆಯಿಂದಾಗಿ ಬಾಗಿಲು ಮುಚ್ಚಿವೆ. ಈ ಪೈಕಿ ತೇಜಕಮಲ್‌ ಫಾರ್ಮಾಸ್ಯುಟಿಕಲ್ಸ್‌ ಕಂಪನಿಯು ಮುಚ್ಚಿರುವುದಕ್ಕೆ ನಿಖರವಾದ ಮಾಹಿತಿಯೇ ಲಭ್ಯವಿಲ್ಲ ಎಂದು ಸರ್ಕಾರ ಉತ್ತರಿಸಿದೆ.

 

ಕಚ್ಚಾ ಮಾಲಿನ ಕೊರತೆಯನ್ನು ಮುಂದಿರಿಸಿಕೊಂಡು ಚಿತ್ರದುರ್ಗದ ಎಂಟೈರ್‌ ಸೆರಾಮಿಕ್ಸ್‌, ಹಣಕಾಸಿನ ಮುಗ್ಗಟ್ಟು ಮತ್ತು ಎನ್‌ಸಿಎಲ್‌ಟಿಯಲ್ಲಿ ಪ್ರಕರಣವನ್ನು ಮುಂದಿರಿಸಿಕೊಂಡು ದಕ್ಷಿಣ ಕನ್ನಡದ ಜೆಬಿಎಫ್‌ ಪೆಟ್ರೋಕೆಮಿಕಲ್ಸ್‌ ಲಿ., ಕಚ್ಚಾ ವಸ್ತು ಯೋಗ್ಯ ದರದಲ್ಲಿ ದೊರೆತಿಲ್ಲ ಎಂಬ ಕಾರಣಕ್ಕಾಗಿ ಗದಗ್‌ನ ದಿ ಫಾರ್ಮರ್ಸ್‌ ಕೋ ಆಫ್‌ ಸ್ಪಿನ್ನಿಂಗ್‌ ಮಿ ಲಿ., ಎಕಾನಾಮಿಕ್‌ ವಯಬಲಿಟಿ ಇಲ್ಲದೇ ಕಾರ್ಮಿಕರಿಗೆ ಸಂಬಳ ಕೊಡಲು ಸಾಧ್ಯವಾಗದೇ ದಿ ಗದಗ್‌ ಕೋ ಆಫ್‌ ಟೆಕ್ಸ್‌ಟೈಲ್ಸ್‌ ಮಿಲ್‌ ಹುಲಿಕೋಟಿ, ತಾಂತ್ರಿಕ ಕಾರಣಗಳಿಂದಾಗಿ ಕೋಲಾರದ ಗ್ಸಾಕೋಸ್ಮಿತಿಕ್ಲೈನ್‌ ಫಾರ್ಮಾಸ್ಯುಟಿಕಲ್ಸ್‌,, ನಿರ್ವಹಣೆ ಮತ್ತು ಆಂತರಿಕ ಸಮಸ್ಯೆಗಳ ಕಾರಣಗಳಿಂದಾಗಿ ರಾಮನಗರದ ಟೆಕೋಯ್‌ ರಬ್ಬರ್‌ ಆಟೋಪಾರ್ಟ್ಸ್‌ ಇಂಡಿಯಾ ಪ್ರೈ ಲಿ., ಮುಚ್ಚಿ ಹೋಗಿವೆ ಎಂದು ಸಚಿವರು ಉತ್ತರದಲ್ಲಿ ವಿವರಣೆ ನೀಡಿದ್ದಾರೆ.

 

ಅದೇ ರೀತಿ ರಾಜ್ಯದಲ್ಲಿ 695 ಬೃಹತ್‌ ಕೈಗಾರಿಕೆಗಳಿಂದ 5,05,883 ಮತ್ತು 1274 ಮಧ್ಯಮ ಕೈಗಾರಿಕೆಗಳಿಂದ 3,01,984 ಸೇರಿ ಒಟ್ಟು 8,07,867 ಜನರಿಗೆ ಉದ್ಯೋಗ ದೊರಕಿಸಿದೆ.

Hot this week

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

Topics

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ...

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ...

ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ...

Related Articles

Popular Categories

spot_imgspot_img