Thursday | June 18, 2026 |

8.34 ಎಕರೆ ವಕ್ಫ್‌ ಆಸ್ತಿ ಹಕ್ಕು; ಕಮರುಲ್ ಇಸ್ಲಾಂ, ದಸ್ತಗಿರ್‍‌ಗೆ ರಿಯಾಯಿತಿ, ತನಿಖೆ ಅಗತ್ಯವೆಂದ ಉಪ ಲೋಕಾಯುಕ್ತ

Support THE-FILE

spot_img

ಬೆಂಗಳೂರು; ಕಲ್ಬುರ್ಗಿ ತಾಲೂಕಿನ ಬಡೇಪುರ ಗ್ರಾಮದ ಸರ್ವೆ ನಂಬರ್‍ 12‌ ರಲ್ಲಿ 8.34 ಎಕರೆ ವಿಸ್ತೀರ್ಣದ ವಕ್ಫ್‌ ಆಸ್ತಿಯನ್ನು ಪ್ಲಾಟ್‌ಗಳನ್ನಾಗಿ ಹಂಚಿಕೆ ಮಾಡಿರುವುದು ಮತ್ತು ಹೈದರಬಾದ್‌ ಮೂಲದ ಚಾರ್ಟೆಡ್‌ ಅಕೌಂಟೆಂಟ್‌ ಸೈಯದ್‌ ಗುಲಾಂ ದಸ್ತಗಿರ್ ಹಾಗೂ ಮಾಜಿ ಸಚಿವ ಕಮರುಲ್ ಇಸ್ಲಾಂ (ದಿವಂಗತ) ಅವರ ಪರವಾಗಿ ವಕ್ಫ್‌ ಮಂಡಳಿಯು ವಿನಾಕಾರಣ ರಿಯಾಯಿತಿ ತೋರಿಸಿತ್ತು ಎಂಬುದನ್ನು ಉಪ ಲೋಕಾಯುಕ್ತ ಎನ್‌ ಆನಂದ್‌ ಅವರು ಬಯಲು ಮಾಡಿದ್ದಾರೆ.

 

ವಕ್ಫ್ ಆಸ್ತಿ ದುರ್ಬಳಕೆ, ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಸೂಚನೆಯಂತೆ ಉಪ ಲೋಕಾಯುಕ್ತರಾಗಿದ್ದ ಎನ್‌ ಆನಂದ್‌ ಅವರು ತನಿಖೆ ನಡೆಸಿದ್ದರು. 2016ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ವಕ್ಫ್‌ ಆಸ್ತಿ ದುರ್ಬಳಕೆಯ ವಿವಿಧ ಮುಖಗಳನ್ನು ತೆರೆದಿಟ್ಟಿದ್ದಾರೆ. ಈ ತನಿಖಾ ವರದಿಯನ್ನು ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಗುಲ್ಬರ್ಗಾದ ಶಾಸಕರು ಮತ್ತು ಸಚಿವರೂ ಆಗಿದ್ದ ಕಮರುಲ್ ಇಸ್ಲಾಂ ಅವರು ವಕ್ಫ್‌ ಆಸ್ತಿಗೆ ಸಂಬಂಧಿಸಿದ ವಾಸ್ತವಾಂಶಗಳನ್ನು ತಪ್ಪಾಗಿ ಪ್ರತಿನಿಧಿಸಿದ್ದರು. ಈ ಮೂಲಕ 8.34 ಎಕರೆ ವಿಸ್ತೀರ್ಣದ ಭೂಮಿಯನ್ನು ಅನಧಿಕೃತವಾಗಿ ಸ್ವಾಧೀನಕ್ಕೆ ಪಡೆದುಕೊಂಡಿದ್ದರು ಎಂದು ಅನ್ವರ್‍‌ ಮಾಣಿಪ್ಪಾಡಿ ಅವರ ನೇತೃತ್ವದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವೂ ತನ್ನ ವರದಿಯಲ್ಲಿ ವಿವರಿಸಿತ್ತು.

 

ಉಪ ಲೋಕಾಯುಕ್ತ ಎನ್‌ ಆನಂದ್‌ ಅವರು ಈ ವರದಿಯಲ್ಲಿನ ಬಹುತೇಕ ಸಂಗತಿ, ಅಂಶಗಳನ್ನು ಮತ್ತಷ್ಟು ವಿಸ್ತರಿಸಿರುವುದು ವರದಿಯಿಂದ ಗೊತ್ತಾಗಿದೆ. 8.34 ಎಕರೆ ವಿಸ್ತೀರ್ಣದ ವಕ್ಫ್‌ ಆಸ್ತಿಯನ್ನು ಕಾಲ್ಪನಿಕ ದಾಖಲೆಗಳ ಮೂಲಕ ವಶಪಡಿಸಿಕೊಂಡು ಸಾರ್ವಜನಿಕರಿಗೆ ಮನೆ, ನಿವೇಶನಗಳ ರೂಪದಲ್ಲಿ ಮಾರಾಟ ಮಾಡಿದ್ದರು ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಕಮರುಲ್ ಇಸ್ಲಾಂ ಅವರು ವಕ್ಫ್‌ ಭೂಮಿಯನ್ನು ಪ್ಲಾಟ್‌ಗಳಾಗಿ ಪರಿವರ್ತಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದೆ ಎಂದು ಮೇಲಿನವುಗಳಿಂದ ಸ್ಪಷ್ಟವಾಗುತ್ತದೆ. ಇದನ್ನು ತನಿಖೆಗೊಳಪಡಿಸುವ ಅಗತ್ಯವಿದೆ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಸೈಯದ್ ಗುಲಾಂ ದಸ್ತಗೀರ್ ಮತ್ತು ಕಮರುಲ್ ಇಸ್ಲಾಂ ಅವರ ಪರವಾಗಿ ವಿನಾಕಾರಣ ರಿಯಾಯತಿಯನ್ನು ತೋರಿಸಿದ್ದಕ್ಕಾಗಿ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕು,’ ಎಂದು ವರದಿಯಲ್ಲಿ ಉಪ ಲೋಕಾಯುಕ್ತರು ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.

 

 

ಕಲ್ಬುರ್ಗಿ ತಾಲೂಕಿನ ಬಡೇಪುರ ಗ್ರಾಮದ ಸರ್ವೆ ನಂಬರ್‍ 12‌ ರಲ್ಲಿ 8.34 ಎಕರೆ ವಕ್ಫ್‌ ಎಂದು 1974ರಲ್ಲೇ ಅಧಿಸೂಚಿಸಲಾಗಿದೆ. ಸೈಯದ್‌ ಶಾ ಮೊಹ್ಮದ್‌ ಹುಸೈನ್, ಅಕ್ಪಬರ್‍‌ ಮೊಹ್ಮದ್‌ ಇವರನ್ನು ಮುತವಲ್ಲಿಗಳು ಎಂದು ಹೇಳಲಾಗಿದೆ. ಮೂಲತಃ ಈ ಜಮೀನು ವಕ್ಫ್‌ ಆಸ್ತಿ ಎಂದು ಜಿಲ್ಲಾ ವಕ್ಫ್‌ ಅಧಿಕಾರಿಗಳೇ ವರದಿ ನೀಡಿದ್ದಾರೆ.

 

ಅಲ್ಲದೇ ಮುತವಲ್ಲಿ ಅಡಿಯಲ್ಲಿ ಅಫ್ಸರ್ ಜಹಾನ್ ಬೇಗಂ ಈ ಜಮೀನಿಗೆ ಗುತ್ತಿಗೆದಾರರಾಗಿದ್ದರು. ಕ್ರಮೇಣ ಆಸ್ತಿಯ ಗುತ್ತಿಗೆ ಹಕ್ಕುಗಳನ್ನು ಅಪ್ಸರ್‍‌ ಜಹಾನ್ ಬೇಗಂ ಅವರು ಸೈಯದ್‌ ಗುಲಾಮ್ ದಸ್ತಗಿರ್‍‌ ಎಂಬುವರಿಗೆ ಮಾರಾಟ ಮಾಡಿದ್ದರು. ಇದಕ್ಕೆ ಸೇಲ್‌ ಡೀಡ್‌ ಕೂಡ ಮಾಡಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

 

ಈ ಮಧ್ಯೆ ಸೈಯದ್‌ ಗುಲಾಮ್ ದಸ್ತಗಿರ್ ಎಂಬುವರು ಕರ್ನಾಟಕ ಇನಾಂ ರದ್ದತಿ ಕಾಯ್ದೆ 1977ರ ಅನ್ವಯ ಅರ್ಜಿ ಸಲ್ಲಿಸಿದ್ದರು. ದರ್ಗಾದ ಮುತವಲ್ಲಿ ಸರ್ವೆ ನಂಬರ್ 12ರಲ್ಲಿನ 8 ಎಕರೆ 34 ಗುಂಟೆ ಜಮೀನನ್ನು ಅಪ್ಸರ್‍‌ ಜಹಾನ್‌ ಬೇಗಂ ಅವರಿಗೆ ಗುತ್ತಿಗೆ ನೀಡಿದ್ದಾರೆ. ಈಕೆ ಹೈದರಾಬಾದ್‌ ಮೂಲದ ಸೈಯದ್‌ ಗುಲಾಂ ದಸ್ತಗಿರ್ ಅವರಿಗೆ ಗುತ್ತಿಗೆ ಹಕ್ಕುಗಳನ್ನು ಮಾರಾಟ ಮಾಡಿದ್ದರು.

 

‘ಆದರೆ, ಸೈಯದ್ ಗುಲಾಮ್ ದಸ್ತಗೀರ್ ಪರವಾಗಿ ಅಫ್ಜರ್ ಜಹಾನ್ ಬೇಗಂ ಅವರು ಗುತ್ತಿಗೆ ಹಕ್ಕುಗಳ ಮಾರಾಟವು ಅನೂರ್ಜಿತವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಾಗೆಯೇ ಹೈದರಾಬಾದ್ ಮೂಲದ ಚಾರ್ಟೆಟ್‌ ಅಕೌಂಟೆಂಟ್‌ ಆಗಿರುವ ಸೈಯದ್‌ ದಸ್ತಗಿರ್, ಗುಲ್ಬರ್ಗಾ ನಿವಾಸಿಯಾಗಿರುವ ಕಮರುಲ್ ಇಸ್ಲಾಂ ಅವರನ್ನು ಜಿಪಿಎ ಹೋಲ್ಡರ್ ಎಂದು ಲ್ಯಾಂಡ್‌ ಟ್ರಿಬ್ಯುನಲ್ ಮುಂದೆ ದಾಖಲೆ ಸಲ್ಲಿಸಿದ್ದರು. ಆದರೆ ಈ ಜಮೀನಿಗೆ ಸೈಯದ್‌ ಗುಲಾಮ್ ದಸ್ತಗಿರ್ ಅವರು ಅರ್ಜಿದಾರರೇ ಆಗಿರಲಿಲ್ಲ,’ ಎಂದು ವಿವರಿಸಿರುವುದು ಗೊತ್ತಾಗಿದೆ.

 

ಲ್ಯಾಂಡ್‌ ಟ್ರಿಬ್ಯೂನಲ್‌ ಈ ಬಗ್ಗೆ ಆದೇಶ ಹೊರಡಿಸಿತ್ತು. 1981ರ ಮಾರ್ಚ್‌ 19 ರಿಂದಲೇ 8 ಎಕರೆ 34 ಗುಂಟೆ ಜಮೀನಿಗೆ ಸೈಯದ್‌ ಗುಲಾಮ್ ದಸ್ತಗಿರ್ ಅವರ ಹೆಸರಿಗೆ ಭೂ ಸ್ವಾಧೀನ ಹಕ್ಕುಗಳನ್ನು ನೀಡಿತ್ತು. ಇದರಿಂದ ಸೈಯದ್‌ ಗುಲಾಮ್ ದಸ್ತಗಿರ್ ಎಂಬಾತ ಈ ಜಮೀನಿಗೆ ಶಾಶ್ವತ ಬಾಡಿಗೆದಾರ ಆಗಿದ್ದ.

 

 

ಅಲ್ಲದೇ ಇದೇ ಪ್ರಕರಣದಲ್ಲಿ ಸೈಯದ್‌ ಗುಲಾಮ್ ದಸ್ತಗಿರ್ ಬಳಿ ನೌಕರನಾಗಿದ್ದ ಮತ್ತೊಬ್ಬ ಅರ್ಜಿದಾರನಾಗಿದ್ದ ಚುನ್ನುಮಿಯಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಲ್ಯಾಂಡ್‌ ಟ್ರಿಬ್ಯೂನಲ್ ವಜಾಗೊಳಿಸಿತ್ತು. ಅಲ್ಲದೇ ಈತ ಜಮೀನನ್ನು ಉಳುಮೆ ಮಾಡುತ್ತಿರಲಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಸೈಯದ್‌ ಗುಲಾಂ ದಸ್ತಗಿರ್‍‌ ಎಂಬಾತ ಚಾರ್ಟಡ್‌ ಅಕೌಂಟೆಂಟ್‌ ಹಾಗೂ ಹೈದರಾಬಾದ್‌ನ ನಿವಾಸಿಯಾಗಿದ್ದ ಮತ್ತು ಈತ ಬಾಡಿಗೆದಾರನೂ ಅಲ್ಲ, ಈ ಜಮೀನಿನಲ್ಲಿ ಉಳುಮೆಯನ್ನೂ ಮಾಡುತ್ತಿರಲಿಲ್ಲ ಎಂಬ ಅಂಶವನ್ನೂ ಲ್ಯಾಂಡ್‌ ಟ್ರಿಬ್ಯೂನಲ್ ಕೂಡ ನಿರ್ಲಕ್ಷ್ಯಿಸಿತ್ತು. ಮತ್ತು ಕರ್ನಾಟಕ ಇನಾಂ ರದ್ದತಿ ಕಾಯ್ದೆಯು ವಕ್ಫ್‌ ಆಸ್ತಿಗೆ ಅನ್ವಯವಾಗುವುದಿಲ್ಲ ಎಂಬ ಕಾನೂನಾತ್ಮಕ ಅಂಶಗಳನ್ನು ಪರಿಶೀಲನೆಗೆ ಒಳಪಡಿಸಿರಲಿಲ್ಲ ಎಂದು ವರದಿಯಲ್ಲಿ ವಿವರಿಸಿದೆ.

 

 

ಮುತವಲ್ಲಿಗಳಿಗೆ ವಕ್ಫ್‌ ಆಸ್ತಿಗಳ ರಕ್ಷಣೆ ಮಾಡುವ ಹೊಣೆಗಾರಿಕೆಯಿದೆಯೇ ವಿನಃ ಇವರಿಗೆ ಈ ಭೂಮಿಯ ಸ್ವಾಧೀನದ ಹಕ್ಕುಗಳನ್ನು ಹೊಂದಲು ಅವಕಾಶವಿಲ್ಲ ಮತ್ತು ಮುತವಲ್ಲಿಗಳು ಈ ವಿಚಾರದಲ್ಲಿ ಸ್ವಯಂ ಯಾವುದೇ ಹಕ್ಕೂ ಹೊಂದಿಲ್ಲ. ಹೀಗಾಗಿ ಮುತವಲ್ಲಿಗಳು ಇತರೆ ಖಾಸಗಿ ಯಾರೇ ವ್ಯಕ್ತಿಗಳಿಗೆ ವಕ್ಫ್‌ ಆಸ್ತಿಯ ಕಾನೂನುಬದ್ಧ ಹಕ್ಕುಗಳನ್ನು ವರ್ಗಾವಣೆ ಮಾಡಲು ಅಧಿಕಾರವಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

Hot this week

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

Topics

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ...

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ...

ವಿಪತ್ತು ನಿರ್ವಹಣೆ; ಕಳೆದು ಹೋದ 12 ಕೋಟಿ, ಹೆಸರಿಗಷ್ಟೇ ಆಪ್ತಮಿತ್ರ, ಎನ್‌ಡಿಆರ್‍ಎಫ್‌ ನಿಧಿ ದುರುಪಯೋಗ?

ಬೆಂಗಳೂರು; ವಿಪತ್ತು ನಿರ್ವಹಣೆ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ...

Related Articles

Popular Categories

spot_imgspot_img